Friday, April 29, 2011

ನೀರವತೆ...


ಒಂಟಿತನ ಎಂಬುದು ಜನಜಂಗುಳಿಯಲ್ಲೂ  ಕಾಡುವ ಆ ನಿನ್ನ ನೆನಪು,
ನಿನ್ನ ಜೊತೆಯಿಲ್ಲದ  ನಾನು,
ನಾನಿಲ್ಲದ ನೀನು,
ಸುಮ್ಮನೆ ಒಬ್ಬಳೇ ಕುಳಿತು ಕಣ್ಣೀರಾಗುವ ಆ ಕ್ಷಣ,
ಮಾತೆ ಬರದ ಆ ಹೊತ್ತಿನ ಮೌನ,
ಕಾರಣವಿಲ್ಲದೆ  ಮೂಡುವ ಆ ಹುಚ್ಚು ನಗೆ
ಗುರಿಯೇ ಇಲ್ಲದ ಆ ನಡೆ
ಮಾಸಿದ ನಗು ಹೊತ್ತ ಆ ಪೇಲವ ಮುಖ
ಎಲ್ಲರದು ಒಂದೇ ಪ್ರಶ್ನೆ...
ಸ್ಪೂರ್ತಿಯ ಚಿಲುಮೆ ಯಾಕೆ ಬರಿದಾಯ್ತು
ಹೂವಿನಂತ ನಗೆ ಎಲ್ಲಿ ಕಳೆದುಹೋಯ್ತು
ಉತ್ತರ ನಿನಗಲ್ಲದೆ ಯಾರಿಗೆ ತಿಳಿದಿರುತ್ತದೆ
ನೀನೆ ಒಮ್ಮೆ ಬಂದು ಹೇಳಿ ಬಿಡು
ಒಂದೇ ಒಂದು ಸಲ ನಿನ್ನ ನೋಡಬೇಕಿದೆ
ಕರುಣೆ ತೋರಿ ಬಂದು ಬಿಡು.. 

2 comments:

  1. ಬಂದೇ ಬರುತ್ತಾನೆ ಬಿಡಿ....
    ಚನ್ನಾಗಿ ಬರ್ದಿದೀರಾ.....
    ಇಷ್ಟ ಆಯ್ತು

    ReplyDelete
  2. barli antha naanu ashisthini :)

    ReplyDelete